ನಿಗೂಢ

ಏನಿದು? ಮಾಯೆ
ಸೃಷ್ಠಿಯ ಛಾಯೆ
ಎಲ್ಲಿಂದ ಎಲ್ಲಿಯವರೆಗೆ
ಹರಡಿದೆ ಜಗತ್ತಿನ ಛಾಯೆ
ಯಾರಾತ? ಎಲ್ಲಿಡಗಿಹನಾತ?
ಸೃಷ್ಠಿಯ ರಹಸ್ಯವ ತಿಳಿಸದಾತ?
ಕತ್ತೆತ್ತಿದರೆ ನೀಲಾಕಾಶ
ಅಸಂಖ್ಯ ತಾರೆಗಳ ಇತಿಹಾಸ
ಸೂರ್ಯ ಚಂದ್ರ ಗ್ರಹಗಳ ಪರಿವೇಷ
ನದಿ ಸಾಗರ ಸಂಗಮ ಸಮಾವೇಷ
ಎಲ್ಲವೂ ಗೂಡ, ನಿಗೂಢ
ಯಾವ ಶಕ್ತಿಯ ಕೈವಾಡ
ವೃಕ್ಷದೊಳಗೆ ಬೀಜವೋ
ಬೀಜದೊಳಗೆ ವೃಕ್ಷವೋ
ಮಂಜಿನ ಒಡಲಲ್ಲಿ
ಕುದಿಯುವ ವಾರಿಧಿ.
ಉರಿಯುವ ನೆರಳಲ್ಲಿ
ತಣ್ಣನೆಯ ಜಲದಿ
ಕಣ್ಣಿಗರಿವಾಗದ ಕೌತುಕ
ಸೃಷ್ಠಿದಾತನ ಕೈಚಳಕ
ಅನಂತ ಸಾಗರದೊಳಗೆ
ಮುತ್ತು ರತ್ನವ ಚೆಲ್ಲಿದ
ವಸುಂಧರೆಯ ಗರ್ಭದಿ
ಕನಕವ ಕರಗಿಸಿದ.
ಮಾನವನ ಎದೆಯೊಳಗೆ
ಅರಿಷಡ್ವರ್ಗಗಳ ತುಂಬಿಸಿ.
ಹಣ ಅಧಿಕಾರ ಕೀರ್ತಿ ಮುಂದಿರಿಸಿ
ಮಾಯಾಮೃಗವನ್ನಾಗಿಸಿ
ಆಡಿಸುವ ಸೂತ್ರಧಾರ
ಯಾರೋ ಅವನ್ಯಾರೋ
ಏನಿದು ಮಾಯೆ?
ಸೃಷ್ಠಿಯ ಛಾಯೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಯಾರೂ ಇಲ್ಲವೆಂದು
Next post ನಾವು ಗೆಳೆಯರು ಹೂವು ಹಣ್ಣಿಗೆ

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

cheap jordans|wholesale air max|wholesale jordans|wholesale jewelry|wholesale jerseys